ಅಂಬರೀಷ್ ಮತ್ತು ಕಾಗೋಡು ತಿಮ್ಮಪ್ಪ
ಅಂಬರೀಷ್ ಮತ್ತು ಕಾಗೋಡು ತಿಮ್ಮಪ್ಪ

ಮಾಜಿ ಸಚಿವ ಅಂಬರೀಷ್ ಸೀರಿಯಸ್ ನೆಸ್ ಇಲ್ಲದ ರಾಜಕಾರಣಿ: ರೆಬೆಲ್ ಸ್ಟಾರ್ ಕಾಲೆಳೆದ ಕಾಗೋಡು

ಮಾಜಿ ವಸತಿ ಸಚಿವ ಹಾಗೂ ನಟ ಅಂಬರೀಷ್ ವಿರುದ್ಧ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹರಿಹಾಯ್ದಿದ್ದಾರೆ..

ಬೆಂಗಳೂರು: ಮಾಜಿ ವಸತಿ ಸಚಿವ ಹಾಗೂ ನಟ ಅಂಬರೀಷ್ ವಿರುದ್ಧ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹರಿಹಾಯ್ದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಅಂಬರೀಷ್ ಸೀರಿಯಸ್ ನೆಸ್ ಇಲ್ಲದ ರಾಜಕಾರಣಿ, ಅಂಬರೀಷ್‌ ಕಾಂಗ್ರೆಸ್‌ ಬಿಟ್ಟು ಹೋದರೆ, ಪಕ್ಷಕ್ಕೆ ಯಾವ ತೊಂದರೆಯೂ ಆಗಲ್ಲ ಎಂದು ಅವರು ಹೇಳಿದ್ದಾರೆ.

ಅಂಬರೀಷ್‌ ಸೀರಿಯೆಸ್‌ನೆಸ್‌ ಇಲ್ಲದ ರಾಜಕಾರಣಿ. ಈ ಮಾತನ್ನು ಹಿಂದೇ ನಾನೇ ಅವರಿಗೆ ಹೇಳಿದ್ದೆ ಎಂದರು.  ಒಂದು ವೇಳೆ ಅವರು ಸೀರಿಯಸ್‌  ಆಗಿ ರಾಜಕಾರಣ ಮಾಡಿದರೆ ಅವರು ತುಂಬಾ ಒಳ್ಳೆಯ ರಾಜಕಾರಣಿ ಆಗಬಲ್ಲರು.

ನಿಮ್ಮ ಕ್ಷೇತ್ರದಲ್ಲಿ ನೀವು ಸೀರಿಯಸ್‌ ಆಗಿ ರಾಜಕಾರಣ ಮಾಡಿ, ನಿಮ್ಮನ್ನು ಹಿಡಿಯುವವರು ಯಾರೂ ಇರಲ್ಲ, ಅವಕಾಶಗಳು ತಾನಾಗೆ ಒದಗಿ ಬರುತ್ತವೆ ಎಂದು ಹೇಳಿದ್ದೆ. ದುರಂತ ಎಂದರೆ ಅಂಬರೀಷ್‌ ರಾಜಕೀಯವನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ, ಡಾ.ರಾಜ್ ಕುಮಾರ್ ನಂತರ ಅಂಬರೀಷ್ಗೆ ಹೆಚ್ಚಿನ ಪ್ರಸಿದ್ಧತೆ ಇದೆ ಎಂದು ಹೇಳಿದ್ದಾರೆ.

ಇನ್ನೂ ಎಸ್ ಎಂ ಕೃಷ್ಣ ಪಕ್ಷ ತೊರೆದ ಸಂಬಂಧ ಪ್ರತಿಕ್ರಿಯಿಸಿದ ಕಾಗೋಡು ಯಾರಿಗೆ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲವೋ ಅವರು ಪಕ್ಷ ತೊರೆಯುತ್ತಾರೆ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟಿದೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com